ಮನಸು

ಮನಸಿರಬೇಕಣ್ಣ
ಒಳ್ಳೆ ಮನಸಿರಬೇಕಣ್ಣ
ಮನಸೊಂದು ಮಮತೆಯ ಬೀಡಾಗಬೇಕು
ಮಧುವಿನಂಥ ಒಂದು ಮಾತೇ ಸಾಕು

ತಗುಲಿರ ಬೇಕಣ್ಣ
ಬಂಧನ ಬಿಗಿದಿರಬೇಕಣ್ಣ
ಹೊಗೆ ಬಂಡಿಯಂತೆ ನಡೆದಿರಬೇಕು
ಸಿಗಲಿಲ್ಲ ತಾವೆಂದು ತವಕಿಸುವಂಥ

ನಗುತಿರಬೇಕಣ್ಣ
ನಗೆಯೊಳು ತಿರುಳಿರಬೇಕಣ್ಣ
ಬಗೆ ಬಗೆ ಬಣ್ಣವ ಸವಿದಿರಬೇಕು
ಜಗವನೆ ತನ್ನೊಳು ತುಂಬಿಸುವಂಥ

ತಿಳಿದಿರಬೇಕಣ್ಣ
ಕೊಳೆಯನು ತೊಳೆದಿರಬೇಕಣ್ಣ
ತಳಮಳವೆಲ್ಲವು ಅಡಗಿರಬೇಕು
ಒಳಗಿನ ದೃಷ್ಟಿಯು ಬಿದ್ದಿರುವಂಥ

ರಸವಿರಬೇಕಣ್ಣ
ಸುಧೆಯನು ಸವಿದಿರಬೇಕಣ್ಣ
ಥಳಥಳಿಸುವ ಮಿಂಚು ಹೊಳೆದಿರಬೇಕು
ಒಳಹೊಕ್ಕು ಜನಕಜೆ ತಣಿದಿರುವಂಥ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತ್ತೆ ಮೂಡುತಿದೆ
Next post ರಾಜಮಾರ್ಗ, ಒಳಮಾರ್ಗ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys